ಆಗ ನಾಡು ನಾಡಿನ ಸಂಚಾರ ಮಾಡಿಕೊಂಡು ನನಗೆ ಭಕ್ತರು ಎಲ್ಲಿದ್ದಾರೆ ಎಂದುಕೊಂಡು ನಮ್ಮ ಕಂಡಾಯದ ಒಡೆಯ ಧರೆಗೆ ದೊಡ್ಡವರು ಶ್ರೀ ಮಂಟೇಸ್ವಾಮಿಯು ಚನ್ನಪಟ್ಟಣದ ಹಾದಿ ಬರುವಾಗ ಅಲ್ಲಿ ಚನ್ನಯ್ಯ ಎಂಬ ಶರಣರ ಮನೆಮುಂದೆ ನಿಂತುಕೊಂಡು ಚನ್ನಯ್ಯ ಎಂದು ಧರೆಗೆ ದೊಡ್ಡಯ್ಯ ಕೂಗಿದೊಡನೆ ಘನ ಶರಣ ಚನ್ನಯ್ಯ ಮನೆಯ ಹೊರಗೆ ಓಡಿಬಂದು ಧರೆಗೆ ದೊಡ್ಡಯ್ಯನ ಪಾದ ಇಡಿದು ಕೊಂಡು ಧನ್ಯವಾಯಿತು ನನ್ನ ಜನುಮ ಧರೆಗೆ ದೊಡ್ಡಯ್ಯ ನಿಮ್ಮ ನೋಡಿ ನೀವು ಎಂದು ಬರುವಿರೋ ಯಾವಾಗ ಬರುವಿರೋ ಎಂದು ಹಗಲು ಇರುಳು ಕಾದು ಕುಳಿತಿದ್ದೆ ಇಂದು ಬಂದೆಯ ಗುರುವೆ ನಮ್ಮ ಮನೆಗೆ ಬಾ ಸ್ವಾಮಿ ಮನೆಯೊಳಗೆ ಎಂದು ಧರೆಗೆ ದೊಡ್ಡವರ ಪಾದವ ಪನ್ನಿರಿನಲ್ಲಿ ತೊಳೆದು ಮನೆಯೊಳಗೆ ಕರೆದುಕೊಂಡು ಬಂದು ಎಲ್ಲಾ ಶಿಶು ಮಕ್ಕಳನ್ನು ಸಹ ಮನೆಯೊಳಗೆ ಕರೆದುಕೊಂಡು ಬಂದಿದ್ದಾರೆ ಚನ್ನಯ್ಯ ಆಗ ಧರೆಗೆ ದೊಡ್ಡವರನ್ನು ಕರಿಯ ಕಂಬಳಿ ಗದ್ದಿಗೆ ಮ್ಯಾಲೆ ಕೂರಿಸಿ ಚನ್ನಯ್ಯ ಧರೆಗೆ ದೊಡ್ಡವರ ಸೇವೆ ಮಾಡುತ್ತಿದ್ದಾರೆ. ಗುರುದೇವಾ ನನ್ನನ್ನು ನಿಮ್ಮ ಶಿಶು ಮಗನಾಗಿ ಮಾಡಿಕೊಳ್ಳಿ ಎಂದು ಚನ್ನಯ್ಯ ಕೇಳುತ್ತಾರೆ ಆಗ ಧರೆಗೆ ದೊಡ್ಡಯ್ಯ ಅಯ್ಯಾ ಈವಾಗ ಬೇಡ ಈ ಪ್ರಪಂಚದಲ್ಲೆ ನಡುರಾಜ್ಯವಾದ ಪುಣ್ಯ ಕ್ಷೇತ್ರದಲ್ಲಿ ನಾವು ನೆಲೆಯಾಗುತ್ತೇವೆ ಅವಾಗ ನಿನ್ನಿಂದಲೆ ಗುದ್ದಲಿ ಪೂಜೆಯು ಆಗಬೇಕು ಆ ಮಠಕ್ಕೆ ನಾನೆ ನಿನ್ನನ್ನು ಬರಮಾಡಿ ಕೊಳ್ಳುತ್ತೇನೆ ಎಂದು ಶರಣ ಚನ್ನಯ್ಯನಿಗೆ ಚನ್ನಪ್ಪಾಜಿ ಎಂದು ಧರೆಗೆ ದೊಡ್ಡವರು ನಾಮಕರಣ ಮಾಡುತ್ತಾರೆ, ಕೇಳು ಚನ್ನಪ್ಪಾಜಿ ಮುಂದೆ ನೀನು ಅವತಾರ ಪುರುಷ ಚನ್ನಪ್ಪಾಜಿ ಹಾಗು ಸಾಲು ಬೆಟ್ಟದ ಸರದಾರ ಮತ್ತು ಜ್ಞಾನ ಜ್ಯೋತಿ ಎಂಬ ಬಿರುದು ಕೊಟ್ಟು ಸದ್ಗುರು ಶರಣ ಶ್ರೀ ಚನ್ನಪ್ಪಾಜಿಯನ್ನು ಕಲಿಯುಗ ಸಾರಿದ ಪರಂಜ್ಯೋತಿ ಶ್ರೀ ಮಂಟೇಸ್ವಾಮಿಯು ಹರಸಿರುತ್ತಾರೆ ..